ರಾಜಕೀಯ

ಕರ್ನಾಟಕದಲ್ಲಿ ಪರ್ಯಾಯ ರಾಜಕೀಯ ಶಕ್ತಿಯಾಗಲು ಎಎಪಿ ತಯಾರಿ: ಬೆಂಗಳೂರಿನಲ್ಲಿ ಮತ್ತೊಂದು ಕಚೇರಿ ಸ್ಥಾಪನೆ

11th Apr 2022 01:12 PM

ADVERTISEMENT

ಬೆಂಗಳೂರು: ರಾಜ್ಯದಲ್ಲಿ ತನ್ನ ಪ್ರಭಾವ ಹೆಚ್ಚಿಸಲು ನಿರ್ಧರಿಸಿರುವ ಎಎಪಿ ಭಾನುವಾರ ಹೊಸ ಕಚೇರಿ ತೆರೆದಿದೆ. ಬೆಂಗಳೂರು ನಗರದಲ್ಲಿ ತೆರೆದಿರುವ 50ನೇ ಕಚೇರಿ ಇದಾಗಿದೆ.

ಭ್ರಷ್ಟಾಚಾರದ ವಿರುದ್ಧ ಹೋರಾಡುವುದು ಪಕ್ಷದ ಮೊದಲ ಆದ್ಯತೆ, ಸಾಂವಿಧಾನಿಕ ಮೌಲ್ಯಗಳ ಬದ್ಧತೆಗಾಗಿ ಸೇವೆ ಮಾಡಲು ತಮ್ಮ ಪಕ್ಷ ನಿರ್ಧರಿಸಿರುವುದಾಗಿ ಎಎಪಿ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಹೇಳಿದ್ದಾರೆ.

ರಾಜಕೀಯ ಭ್ರಷ್ಟಾಚಾರ, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನ ಭ್ರಮ ನಿರಸನಗೊಂಡಿದ್ದಾರೆ ಎಂದು ಎಎಪಿ ಉಪಾಧ್ಯಕ್ಷ ಪ್ರಕಾಶ್ ನೆಡುಂಗಡಿ ಹೇಳಿದ್ದಾರೆ.

ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಯಶಸ್ಸು ಕಂಡ ನಂತರ ಎಎಪಿ ಕರ್ನಾಟಕ ರಾಜಕೀಯದಲ್ಲಿ ಪರ್ಯಾಯ ಶಕ್ತಿಯಾಗುವ ಜನರ ಭರವಸೆಯಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

ADVERTISEMENT

MORE FROM THE SECTION

ADVERTISEMENT